
ಹೆಂಡತಿಯಾಬ್ಬಳು ಮನೆಯಾಳ್ಗಿದ್ದರೆ.....
ಸುಪ್ರಸಿದ್ದ ಕವಿ ಕೆ.ಎಸ್.ನರಸಿಂಹಸ್ವಾಮಿಯವರ ಗೀತೆಯನ್ನ ಅನುಸರಿಸಿ,ಅದರ ಭಾವಾರ್ಥವನ್ನ ಬದಲಿಸಿ ರಚಿಸಿದ ಒಂದು ಗೀತೆ......
ಹೆಂಡತಿಯಾಬ್ಬಳು ಮನೆಯಾಳ್ಗಿದ್ದರೆ,
ಖರ್ಚೋ ಖರ್ಚು ರುಪಾಯಿ.
ಹೆಂಡತಿಯಾಬ್ಬಳು ಹತ್ತಿರವಿದ್ದರೆ ,
ಕಿಸೆಯಾಗುವುದೂ ಖಾಲಿ!!
ಹೆಂಡತಿಯಾಬ್ಬಳು ಮನೆಯಾಳಗಿದ್ದರೆ,
ಆರದು ಕೋಪದ ದೀಪ.
ಹೆಂಡತಿ ತೌರಿಗೆ ಹೊರಡುವೆನೆಂದರೆ,
ತಗ್ಗಿತು ಖರ್ಚಿನ ತಾಪ!
ಕೈಹಿಡಿದವಳು, ಅಡಿಗೆ ಬರದವಳು,
ಬಿಡುಗಡೆ ಸೌಟಿಗೆ ಅವಳಿಂದಾ.
ರುಚಿರುಚಿಯಾಗಿ ತಿನ್ನಲು ಬಯಸಿ,
ತರಿಸುವೆ ಊಟವ ಹೊಟೆಲ್ನಿಂದಾ!!
ಜಗಳವ ಆಡಲು ನಿಂತಿಹಳಲ್ಲ,
ಮಾತಿಗೆ ಬಡತನವಲ್ಲಾ.
ಮೌನವ್ರತವನೇ ಹಿಡಿವಿದು ಕ್ಷೇಮ,
ಗೆಲ್ಲುವ ಭರವಸೆ ಇಲ್ಲ!!
ಡೈಮಂಡ್ ನೆಕ್ಲೇಸ್ ಬೇಕೆನ್ನುವಳಲ್ಲ,
ಶ್ರೀಮಂತನ ಮಗಳೀ ಬಾಲೆ.
ತರದಿದ್ರೆ ಮಂಗಳಾರ್ತಿ ಎತ್ತುವಳಲ್ಲ
ಹೆಂಡತಿ ಕೋಪದ ಜ್ವಾಲೆ!!
ಹೆಂಡತಿಯಾಬ್ಬಳು ಮನೆಯಾಳ್ಗಿದ್ದರೆ,
ಖರ್ಚೋ ಖರ್ಚು ರುಪಾಯಿ.
ಹೆಂಡತಿಯಾಬ್ಬಳು ಹತ್ತಿರವಿದ್ದರೆ
ಗಂಡನಾದ ಬಡಪಾಯಿ !!